ಬ್ರೇಕಿಂಗ್ ನ್ಯೂಸ್
13-12-23 10:42 pm Mangalore Correspondent ಕರಾವಳಿ
ಮಂಗಳೂರು, ಡಿ.13: ಶಬರಿಮಲೆಯಲ್ಲಿ ಈ ಬಾರಿ ಮಂಡಲ ಪೂಜೆಯ ಸಂದರ್ಭದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಹೀಗಾಗಿ ಶಬರಿಮಲೆಗೆ ತೆರಳುವ ಪಂಪಾ ನದಿಯ ತೀರದಲ್ಲೇ ಭಕ್ತರಿಗೆ ಪ್ರವೇಶಕ್ಕೆ ತೊಡಕಾಗಿದ್ದು, ಮಂಗಳವಾರ ಭಕ್ತರು ದಿಢೀರ್ ಆಗಿ ಪೊಲೀಸರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದ ಭಕ್ತರು ಹೆಚ್ಚಿದ್ದರಿಂದ ಭಕ್ತರನ್ನು ಸರಾಗವಾಗಿ ಹೋಗಲು ಬಿಡದೆ ಅಲ್ಲಲ್ಲಿ ಕೂಡಿ ಹಾಕಲಾಗಿತ್ತು. ಎರುಮೇಲಿ ಬೆಟ್ಟದಲ್ಲಿ ತಿರುಪತಿಯಲ್ಲಿ ಹಾಲ್ಗಳಲ್ಲಿ ಕೂಡಿ ಹಾಕುವಂತೆ ಅಲ್ಲಲ್ಲಿ ಭಕ್ತರನ್ನು ಗಂಟೆಗಳ ಕಾಲ ಕೂಡಿ ಹಾಕುತ್ತಿದ್ದರು. ಇದರಿಂದ ಸನ್ನಿಧಾನ ತಲುಪಲು ತುಂಬ ಪ್ರಯಾಸ ಪಡಬೇಕಾಯಿತು ಎಂದು ಸಿದ್ಧಕಟ್ಟೆಯಿಂದ ರೈಲಿನಲ್ಲಿ ಶಬರಿಮಲೆಗೆ ಹೋಗಿ ಬಂದ ಗೋಪಾಲ್ ತಿಳಿಸಿದ್ದಾರೆ.
ನಾವು ಈ ಸಲ 14 ವರ್ಷ ಶಬರಿಮಲೆಗೆ ಹೋಗಿದ್ದೆವು. ಪ್ರತಿ ವರ್ಷ ಮಾಲೆ ಹೋಗಿ ಹೋಗುತ್ತಿದ್ದರೂ, ಈ ಬಾರಿಯಷ್ಟು ಜನರನ್ನು ಮಂಡಲದ ಸಂದರ್ಭದಲ್ಲಿ ನೋಡಿರಲಿಲ್ಲ. ಯಾವಾಗಲೂ ಮಕರ ಬೆಳಕು ಸಂದರ್ಭದಲ್ಲಿ ಹೋಗುತ್ತಿದ್ದೆವು. ಈ ಬಾರಿ ಮಂಡಲ ಪೂಜೆಗೆ ಹೋಗಿದ್ದೆವು. ಸೋಮವಾರ, ಮಂಗಳವಾರ ಭಾರೀ ರಶ್ ಇತ್ತು. ಹೆಚ್ಚಿನ ಭಕ್ತರು ಆಂಧ್ರ ಮತ್ತು ತಮಿಳುನಾಡಿನವರೇ ಇದ್ದರು. ಅಲ್ಲಲ್ಲಿ ಕೂಡಿ ಹಾಕಿ ಹೋಗಲು ಬಿಡುತ್ತಿದ್ದುದೇ ಸಮಸ್ಯೆ ಆಗಿತ್ತು. ಆ ರೀತಿ ಯಾಕೆ ಮಾಡುತ್ತಿದ್ದರು ಗೊತ್ತಾಗಲ್ಲ. ಈ ಹಿಂದೆಯೂ ಮಕರದ ವೇಳೆ ಇಷ್ಟೇ ಜನರು ಸೇರುತ್ತಿದ್ದರು. ತೊಂದರೆ ಏನೂ ಆಗುತ್ತಿರಲಿಲ್ಲ ಎಂದು ಸಿದ್ಧಕಟ್ಟೆಯಿಂದ ಮಲೆಗೆ ತೆರಳಿರುವ ಸಂತೋಷ್ ಹೇಳುತ್ತಾರೆ.
ಮಲಯಾಳಂ ಮನೋರಮಾ ವರದಿ ಪ್ರಕಾರ, ಕೇರಳ, ತಮಿಳುನಾಡು, ಆಂಧ್ರ ಭಾಗದ ಭಕ್ತರು ಹೆಚ್ಚಿದ್ದರು. ಎರುಮೇಲಿ, ಪಂಪಾದಲ್ಲಿಯೇ ಪೊಲೀಸರು ಅಡ್ಡ ಹಾಕಿದ್ದರಿಂದ ರಶ್ ಆಗಿ ಹೆಚ್ಚಿನ ಜನ ಅಲ್ಲಿಂದಲೇ ಹಿಂತಿರುಗಿದ್ದಾರೆ. ನೂರಾರು ಮಂದಿಯನ್ನು ಏಟ್ಟುಮಾನೂರು ದೇವಸ್ಥಾನ ಬಳಿ ನಿಲ್ಲಿಸಲಾಗಿತ್ತು. ಒಂದು ದಿನ ಕಾದರೂ ಪಂಪೆಗೆ ಹೋಗಲು ಬಿಡದೇ ಇದ್ದುದರಿಂದ ಸಿಟ್ಟಾದ ಭಕ್ತರು ನಿರಾಸೆಗೊಂಡು ಅಲ್ಲಿಂದಲೇ ಮಾಲೆ ತೆಗೆದು ನಿರ್ಗಮಿಸಿದ್ದಾರೆ. ಶಬರಿಮಲೆಯಲ್ಲಿ ಅವ್ಯವಸ್ಥೆ, ಸಮಸ್ಯೆ ಆಗಿರುವ ಬಗ್ಗೆ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಪ್ರತಿಕ್ರಿಯಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕುಯ ಯಾರಿಂದ ಈ ಸಮಸ್ಯೆ ಆಗಿದೆ ಎನ್ನುವುದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.
A large number of devotees gathered at Sabarimala during the Mandala Pooja this year. On Tuesday, devotees staged a protest against the police on the banks of the Pampa river, which leads to Sabarimala.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm