ಬ್ರೇಕಿಂಗ್ ನ್ಯೂಸ್
13-12-23 10:42 pm Mangalore Correspondent ಕರಾವಳಿ
ಮಂಗಳೂರು, ಡಿ.13: ಶಬರಿಮಲೆಯಲ್ಲಿ ಈ ಬಾರಿ ಮಂಡಲ ಪೂಜೆಯ ಸಂದರ್ಭದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಹೀಗಾಗಿ ಶಬರಿಮಲೆಗೆ ತೆರಳುವ ಪಂಪಾ ನದಿಯ ತೀರದಲ್ಲೇ ಭಕ್ತರಿಗೆ ಪ್ರವೇಶಕ್ಕೆ ತೊಡಕಾಗಿದ್ದು, ಮಂಗಳವಾರ ಭಕ್ತರು ದಿಢೀರ್ ಆಗಿ ಪೊಲೀಸರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದ ಭಕ್ತರು ಹೆಚ್ಚಿದ್ದರಿಂದ ಭಕ್ತರನ್ನು ಸರಾಗವಾಗಿ ಹೋಗಲು ಬಿಡದೆ ಅಲ್ಲಲ್ಲಿ ಕೂಡಿ ಹಾಕಲಾಗಿತ್ತು. ಎರುಮೇಲಿ ಬೆಟ್ಟದಲ್ಲಿ ತಿರುಪತಿಯಲ್ಲಿ ಹಾಲ್ಗಳಲ್ಲಿ ಕೂಡಿ ಹಾಕುವಂತೆ ಅಲ್ಲಲ್ಲಿ ಭಕ್ತರನ್ನು ಗಂಟೆಗಳ ಕಾಲ ಕೂಡಿ ಹಾಕುತ್ತಿದ್ದರು. ಇದರಿಂದ ಸನ್ನಿಧಾನ ತಲುಪಲು ತುಂಬ ಪ್ರಯಾಸ ಪಡಬೇಕಾಯಿತು ಎಂದು ಸಿದ್ಧಕಟ್ಟೆಯಿಂದ ರೈಲಿನಲ್ಲಿ ಶಬರಿಮಲೆಗೆ ಹೋಗಿ ಬಂದ ಗೋಪಾಲ್ ತಿಳಿಸಿದ್ದಾರೆ.
ನಾವು ಈ ಸಲ 14 ವರ್ಷ ಶಬರಿಮಲೆಗೆ ಹೋಗಿದ್ದೆವು. ಪ್ರತಿ ವರ್ಷ ಮಾಲೆ ಹೋಗಿ ಹೋಗುತ್ತಿದ್ದರೂ, ಈ ಬಾರಿಯಷ್ಟು ಜನರನ್ನು ಮಂಡಲದ ಸಂದರ್ಭದಲ್ಲಿ ನೋಡಿರಲಿಲ್ಲ. ಯಾವಾಗಲೂ ಮಕರ ಬೆಳಕು ಸಂದರ್ಭದಲ್ಲಿ ಹೋಗುತ್ತಿದ್ದೆವು. ಈ ಬಾರಿ ಮಂಡಲ ಪೂಜೆಗೆ ಹೋಗಿದ್ದೆವು. ಸೋಮವಾರ, ಮಂಗಳವಾರ ಭಾರೀ ರಶ್ ಇತ್ತು. ಹೆಚ್ಚಿನ ಭಕ್ತರು ಆಂಧ್ರ ಮತ್ತು ತಮಿಳುನಾಡಿನವರೇ ಇದ್ದರು. ಅಲ್ಲಲ್ಲಿ ಕೂಡಿ ಹಾಕಿ ಹೋಗಲು ಬಿಡುತ್ತಿದ್ದುದೇ ಸಮಸ್ಯೆ ಆಗಿತ್ತು. ಆ ರೀತಿ ಯಾಕೆ ಮಾಡುತ್ತಿದ್ದರು ಗೊತ್ತಾಗಲ್ಲ. ಈ ಹಿಂದೆಯೂ ಮಕರದ ವೇಳೆ ಇಷ್ಟೇ ಜನರು ಸೇರುತ್ತಿದ್ದರು. ತೊಂದರೆ ಏನೂ ಆಗುತ್ತಿರಲಿಲ್ಲ ಎಂದು ಸಿದ್ಧಕಟ್ಟೆಯಿಂದ ಮಲೆಗೆ ತೆರಳಿರುವ ಸಂತೋಷ್ ಹೇಳುತ್ತಾರೆ.
ಮಲಯಾಳಂ ಮನೋರಮಾ ವರದಿ ಪ್ರಕಾರ, ಕೇರಳ, ತಮಿಳುನಾಡು, ಆಂಧ್ರ ಭಾಗದ ಭಕ್ತರು ಹೆಚ್ಚಿದ್ದರು. ಎರುಮೇಲಿ, ಪಂಪಾದಲ್ಲಿಯೇ ಪೊಲೀಸರು ಅಡ್ಡ ಹಾಕಿದ್ದರಿಂದ ರಶ್ ಆಗಿ ಹೆಚ್ಚಿನ ಜನ ಅಲ್ಲಿಂದಲೇ ಹಿಂತಿರುಗಿದ್ದಾರೆ. ನೂರಾರು ಮಂದಿಯನ್ನು ಏಟ್ಟುಮಾನೂರು ದೇವಸ್ಥಾನ ಬಳಿ ನಿಲ್ಲಿಸಲಾಗಿತ್ತು. ಒಂದು ದಿನ ಕಾದರೂ ಪಂಪೆಗೆ ಹೋಗಲು ಬಿಡದೇ ಇದ್ದುದರಿಂದ ಸಿಟ್ಟಾದ ಭಕ್ತರು ನಿರಾಸೆಗೊಂಡು ಅಲ್ಲಿಂದಲೇ ಮಾಲೆ ತೆಗೆದು ನಿರ್ಗಮಿಸಿದ್ದಾರೆ. ಶಬರಿಮಲೆಯಲ್ಲಿ ಅವ್ಯವಸ್ಥೆ, ಸಮಸ್ಯೆ ಆಗಿರುವ ಬಗ್ಗೆ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಪ್ರತಿಕ್ರಿಯಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕುಯ ಯಾರಿಂದ ಈ ಸಮಸ್ಯೆ ಆಗಿದೆ ಎನ್ನುವುದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.
A large number of devotees gathered at Sabarimala during the Mandala Pooja this year. On Tuesday, devotees staged a protest against the police on the banks of the Pampa river, which leads to Sabarimala.
07-08-26 04:18 pm
HK News Staffer
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ...
04-08-26 09:12 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
06-08-26 11:03 pm
Mangaluru Staffer
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳ...
06-08-26 08:09 pm
ಸುರತ್ಕಲ್ ಎನ್ಐಟಿಕೆ ಕಾಲೇಜು ಹಾಸ್ಟೆಲ್ನಲ್ಲಿ ಸ್ವಯ...
05-08-26 08:08 pm
07-08-26 06:00 pm
HK News Staffer
ಬಟ್ಟೆ ವಿಚಾರಕ್ಕೆ ಸಹೋದರಿಯರ ಸಣ್ಣ ಜಗಳ; ತಾಯಿ ಬೈದಿದ...
07-08-26 04:22 pm
ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಇಬ್ಬರು ಯುವತಿಯರ ಪ್...
07-08-26 12:35 pm
ಲವ್ - ಸೆಕ್ಸ್..ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸ...
06-08-26 09:31 pm
ಲವ್ - ಸೆಕ್ಸ್ ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸಿ...
06-08-26 09:31 pm